ಬುಧವಾರ, ಡಿಸೆಂಬರ್ 28, 2011


ಚಳಿಗಾಲ 
-- ಈ ದಿನದ ಗಾಳಿ ವಿಚಿತ್ರ 
ಹಾರುವ ಹಕ್ಕಿಯು ದಿಕ್ಕು ಬದಲಿಸಿ ಚಲಿಸುತ್ತಿದೆ 
ಮರ ಗಿಡ ಹಾಯಾಗಿ ಒರಗಿ 
ಎಲೆಗಳು ಮುರುಟಿ ಮಲಗಿ 
ತಡ ಮಾಡಿ ಎದ್ದಾಗ- 
ಉದುರಿ ಬಿದ್ದ ಮೈ ಕಾಂತಿ.
ನೀರ ಮುಟ್ಟಲು ಭಯ, ಕೊರೆವ 
ಗಿಡ ಮರ ನೆಲನ ಮುತ್ತಿ ಮಾತಾಡಿಸಲು 
ಆಕಾಶದ ಅಂಚು ಬಟ್ಟಂಬಯಲು 
ಮೋಡ ಮೇಲೇಳಲು 
ಗಡಿ ದಾಟಿ ಹಾರಲು ಯಾರಪ್ಪಣೆ ಆಗಬೇಕು.

ಚಳಿಯ ಸೋಂಬೇರಿತನ ಚಾದರ 
ಹೊತ್ತು, ಗೂಡಗಾಲಲ್ಲಿ ಮುಖ ಮುದುಡಿ 
ಬೆಚ್ಚಗಿರಲು ಎಳೀ ಸೂರ್ಯ ಈಗ ಮಿಟುಕಲಾಡಿ 
ವಿಪರೀತ ಕಣ್ಣ ಸೋಗಿನ ಹಾವಳಿ 

                                                          mahadev hadapad  9972352163

ಕಾಮೆಂಟ್‌ಗಳಿಲ್ಲ:

ಧಾರವಾಡ ಎಂಬ ಸ್ವಾವಲಂಬನೆಯ ಸಾಂಸ್ಕೃತಿಕ ನಗರ

ಉತ್ತರಕರ್ನಾಟಕದ ಸಾಂಸ್ಕೃತಿಕ ಐಕಾನ್ ಧಾರವಾಡ. ದೇಶದ ಹೆಸರಾಂತ ಸಂಗೀತ ವಿದೂಷಿಗಳು, ಪಂಡಿತರು ಧಾರವಾಡ ನೆಲದಲ್ಲಿ ಸಂಗೀತ ಕಛೇರಿ ಕೊಡಲಿಕ್ಕೆ ಕಾಯುತ್ತಾರೆ ಹೇಗೋ ಹಾಗೆಯೇ ನ...