ಗುರುವಾರ, ಸೆಪ್ಟೆಂಬರ್ 27, 2012

ರಂಗಾಯಣದಲ್ಲಿ ಚಿಂತನ ಚಿತ್ತಾರ..


avadhi krupe
ಈಗಲೂ ಸ್ವರ್ಗದಲ್ಲಿರುವ ಚಿಂತಕ ಡಿ. ಆರ್ . ನಾಗರಾಜ್ ಅವರು ಇಲ್ಲೇ ಇದ್ದಾಗ ಅನುವಾದಿಸಿದ
ಪುಸ್ತಕವೊಂದರ ಹೆಸರು: ವಸಂತ ಸ್ಮೃತಿ.
ಇದು ನಿಮಗೂ ತಿಳಿದಿರುವ ಹಾಗೆ ರೂಮಿ ಕವಿತೆಗಳ ಅನುವಾದ ಸಂಕಲನ. ಇದರಲ್ಲಿ ‘ದಾರಿ ತಪ್ಪಿದ
ಗಿಡುಗ’ ಎಂಬ ಹೆಸರಿನ ಕವಿತೆ ಇದೆ.
ಈ ಇಂಥಹ ಕವಿತೆಯನ್ನೇ ಬಾಳಿದ ಕಥೆಯಂತೆ ಚಿತ್ರಕಾರ ವ್ಯಾನ್ ಗೋನ ಜೀವನ ಭಾಸವಾಗುತ್ತದೆ; ಒಡಲು
ಮತ್ತು ಒಡಹುಟ್ಟಿನ ಮೂಲವನ್ನು
ಹಿಡಿದು ಅಲ್ಲಾಡಿಸುತ್ತದೆ. ಅಂದಹಾಗೆ; ಈ ಪುಸ್ತಕದ ಮರುಮುದ್ರಣ ಕನ್ನಡದಲ್ಲಿ ಕೆಲವು ತಿಂಗಳ
ಹಿಂದಷ್ಟೇ ಆಗಿದೆ (ನವಕರ್ನಾಟಕ ಪ್ರಕಾಶನ).
ಹೊಸ ತಲೆಮಾರಿನ ಹುಡುಗರು ಅದರಲ್ಲೂ ಮೈಸೂರಿನ ರಂಗಾಯಣದ ಗಾಳಿಯಲ್ಲಿ ಸುಳಿದಾಡುವವರಲ್ಲಿ ಈ
ಪುಸ್ತಕ: ನೋವಿಗದ್ದಿದ ಕುಂಚ ಹೊಸ
ಸಂಚಲನವನ್ನು ಉಂಟು ಮಾಡಿದೆ. ಈ ಕೃತಿಯ ಚರ್ಚೆ – ಸಂವಾದವು ೨೯.೦೯.೨೦೧೨ ರಂದು ರಂಗಾಯಣದ
ಶ್ರೀರಂಗದಲ್ಲಿ ಸಂಜೆ ೫ ಗಂಟೆಗೆ ಜರುಗಲಿದೆ.
ದಯವಿಟ್ಟು ನೀವು ನಿಮ್ಮ ಸ್ನೇಹಿತರು ಕೂಡಿ ಬನ್ನಿ. ಇದೇ ಸಂಧರ್ಭದಲ್ಲಿ ಈ ಸಲದ ಕಾರ್ಯಕ್ರಮದ
ಆಹ್ವಾನ ಪತ್ರಿಕೆಯನ್ನು ರೂಪಿಸಿರುವ ಮೈಸೂರಿನ ಚಿತ್ರಕಾರ ಕೆ.ಜೆ. ಸಚ್ಚಿದಾನಂದ ಅವರಿಗೆ
‘ಚಿಂತನ ಚಿತ್ತಾರ’ದ ವಂದನೆಗಳು.

ಕಾಮೆಂಟ್‌ಗಳಿಲ್ಲ:

ಧಾರವಾಡ ಎಂಬ ಸ್ವಾವಲಂಬನೆಯ ಸಾಂಸ್ಕೃತಿಕ ನಗರ

ಉತ್ತರಕರ್ನಾಟಕದ ಸಾಂಸ್ಕೃತಿಕ ಐಕಾನ್ ಧಾರವಾಡ. ದೇಶದ ಹೆಸರಾಂತ ಸಂಗೀತ ವಿದೂಷಿಗಳು, ಪಂಡಿತರು ಧಾರವಾಡ ನೆಲದಲ್ಲಿ ಸಂಗೀತ ಕಛೇರಿ ಕೊಡಲಿಕ್ಕೆ ಕಾಯುತ್ತಾರೆ ಹೇಗೋ ಹಾಗೆಯೇ ನ...