ಗುರುವಾರ, ಏಪ್ರಿಲ್ 12, 2012





PUPPET HOUSE(ಗೊಂಬೆಮನೆ) 


Our Workshop Photographs

Childrens are involving in Craft work

Childrens are making puppets in waste materials

Clay modeling

Childrens are performing a play 'Tempest'

Costume Designing

Chidrens are doing Mural

JSS college Dharad students performing a play Andhayuga

Gajanan Mahale conducting Make-up class for Govt Teachers

National Residential school Shimoga  childrens performing a drama

Performing a play by SJMVS  Womens College Hubli

Puppet performance by Childrens


Pupptry workshop

Semi Profession activity - Swapnadarshana Drama

Students are involving makeup

Puppetry workshop to D.Ed Students

Puppetry making, clay modeling

Study materials models for childrens

ಸೋಮವಾರ, ಏಪ್ರಿಲ್ 9, 2012


ಸಾಂಸ್ಕೃತಿಕ ರಾಯಭಾರಿ ಕರ್ನಾಟಕದ ಗಡಿಭಾಗ ಕೊಳ್ಳೇಗಾಲ ಭಾಗದ ಜನರ ಮನೆಯ ಆರಾಧ್ಯ ದೈವ ಮಂಟೇಸ್ವಾಮಿ ಕುರಿತ ಕಾವ್ಯ, ಅದು ಹೊಂದಿರುವ ಒಳ್ಪು ಇಂದಿಗೂ ಪ್ರಸ್ತುತ. ಭಾನುವಾರ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನಗೊಂಡ ಮಂಟೇಸ್ವಾಮಿ ಕಥಾಪ್ರಸಂಗ ನಾಟಕವು ವಾಸ್ತವ ಬದುಕನ್ನು ಅಕ್ಷರಶಃ ಕನ್ನಡಿಯಂತೆ ಪ್ರತಿಬಿಂಬಿಸಿತು. ಕಾಲ ಬದಲಾದರೂ ಮಾನವನ ಮನೋಭಾವ ಮಿಸುಕಾಡಿಲ್ಲ. ರೂಪ, ಸ್ವರೂಪ ಬೇರೆಯದ್ದು ಅಷ್ಟೆ. ಜನರ ಢಂಬಾಚಾರವನ್ನು ಪರೀಕ್ಷಿಸಿ, ಬದಲಿಸಲು ಯತ್ನಿಸುವ ಒಂದು ರೂಪವಾಗಿ ಕಾಣುವ ಜಂಗಮಯ್ಯ, ಜನರ ಅಪ್ರಬುದ್ಧತೆಯನ್ನು ಎಳೆಎಳೆಯಾಗಿ ಬಿಡಿಸಿಡುತ್ತಾನೆ.
ಮಾನವ ತನ್ನ ಒಳಗಣ್ಣನ್ನು ತೆರೆದು ಸಾಮಾಜಿಕ ಬದುಕಿಗೆ ತೆರೆದುಕೊಳ್ಳುವಂತೆ ನಾಟಕವು ಪ್ರತಿ ಹಂತದಲ್ಲೂ ಸೂಚ್ಯವಾಗಿ ಸಲಹೆ ನೀಡುತ್ತಾ ಹೋಗುತ್ತದೆ. ರಂಗಮಂಟಪದಲ್ಲಿ ಜಂಗಮಯ್ಯನ ಆರ್ಭಟವಂತೂ ಧಾರ್ಮಿಕ ಅಂಧಕಾರದಲ್ಲಿ ಮುಳುಗಿದವರನ್ನು ಬಡಿದೆಬ್ಬಿಸುತ್ತದೆ. ವಯೋವೃದ್ಧನೂ, ಜ್ಞಾನವೃದ್ಧನೂ ಆದ ಜಂಗಮಯ್ಯನು ವೇದಿಕೆಯ ಅಷ್ಟೂ ದಿಕ್ಕುಗಳಲ್ಲಿ ತನ್ನ ಪಾರಮ್ಯ ಮೆರೆಯುತ್ತಾನೆ. ಅವನ ಕುಣಿತ, ನೆಗೆತ, ಆರ್ಭಟ, ಕೂಗಾಟ ಪ್ರೇಕ್ಷಕರನ್ನು ಸ್ಥಂಭೀಭೂತರನ್ನಾಗಿ ಮಾಡುತ್ತದೆ.
ನಾಟಕಕ್ಕೆ ಒಂದು ಚೌಕಟ್ಟು ಹಾಗೂ ತನ್ಮಯತೆ ಮೂಡಿಸಿದ್ದು ಹಿನ್ನೆಲೆ ಗಾಯನ. ಜನಪದ ಗೀತೆಗಳನ್ನು ನಾಟಕಕ್ಕೆ ಅಳವಡಿಸಿ, ಮನದುಂಬಿ ಹಾಡಿ, ಏಕತಾನತೆಯಿಂದ ಬಹುದೂರು ಸಾಗುವಂತೆ ಮಾಡುತ್ತದೆ. ಆ ಗೀತೆಗಳಲ್ಲಿರುವ ಲಾಲಿತ್ಯ ಎಂಥವರನ್ನೂ ತಲೆದೂಗಿಸಿತು. ಪ್ರತಿನಿತ್ಯದ ಗೊಂದಲಗಳಿಂದ ಕೊಂಚ ಬಿಡುಗಡೆ ನೀಡಿ, ಮನವನ್ನು ಮುದಗೊಳಿಸಿದ್ದು ಎಲ್ಲ ಸಹೃದಯರ ಮೊಗದಲ್ಲೂ ಎದ್ದು ಕಾಣುತ್ತಿತ್ತು. ಮಂಟೇಸ್ವಾಮಿ ಕಥಾಪ್ರಸಂಗವು ಸಾಂಸ್ಕೃತಿಕ ರಾಯಭಾರಿ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿತು.

ಭಾನುವಾರ, ಏಪ್ರಿಲ್ 8, 2012

……ದ ಎಚ್ಚರಿಕೆ

ಅಂದೂ ನೀ ಮಲಗಿದ್ದೆ
ಇಂದೂ ನೀ ಮಲಗಿದ್ದೀ….
ಆದರೆಂದೆಂದೂ ಎಚ್ಚರವಾಗಿದ್ದೆ ನಾ…..

ಅಂದೂ ಬೀಜವಾಗಿದ್ದೆ ನಾ ಮೊಳಕೆಯೊಡದಿದ್ದೆ,
ಇಂದು ಬಲಿತ ಮರವಾಗಿದ್ದೀ..ನಾ ಹೆಮ್ಮರವಾಗಿದ್ದೇನೆ
ಅಂದು ನಾ ತೋರಿದ ಎಚ್ಚತ್ತ ಜಗತ್ತನ್ನು ನೀ ಅಚ್ಚರಿಯಿಂದ ನೋಡಿದೆ….
ಆ ಅಚ್ಚರಿಯ ಎಚ್ಚರಿಕೆಯ ಮರೆತುಬಿಟ್ಟೆ
ಆದರೆಂದೆಂದೂ ನಾ ಎಚ್ಚರವಾಗಿದ್ದೆ….

ಆದಿಯಿಂದ
ದಿನದಿನವೂ
ಮೊದ್ದುತನದ ಬುದ್ದಿಯಲಿ
ಮರೆತಂತೆ ರೂಢಿಸಿಕೊಂಡುಬಿಟ್ಟೆ.
ಆದರೆಂದೆಂದೂ ನಾ ಎಚ್ಚರವಾಗಿದ್ದೆ….

ಮಾತಾ ಮಮತೆಯಲಿ, ಗುರುವಿನ ಸಜಾ-ರುಜುವಿನಲಿ
ಪಿತನ ವಾತ್ಸಲ್ಯದಲಿ, ಒಡಹುಟ್ಟಿನ ೊಗ್ಗೂಡದ ಜಗಳದಲಿ
ಗೆಳೆತನದ ಒಳಿತಿನಲಿ, ಸಂಬಂಧಗಳ ಬೆಂಬಲದಲಿ
ಶತೃವಿನ ವೈರತ್ವದಲಿ, ಟೀಕಾಸ್ತ್ರ ಕಿಟಕಿಟಿಯಲಿ
ಒಟ್ಟಿನಲಿ
ನಿನ್ನೆಲ್ಲ ರಂಗದ ಬರಿದಾಗದರಿಯುವ ಜಲದಲಿ

ನಾ ಎಚ್ಚರಿಸಿದೆ….
ನಿನ್ನ ಹುಚ್ಚುತನದಲಿ ಎಚ್ಚರಿಕೆಯ ಮರೆತುಬಿಟ್ಟೆ
ಆದರೆಂದೆಂದೂ ನಾ ಎಚ್ಚರವಾಗಿದ್ದೆ……

ಶಾಸ್ತ್ರ ಸೂಕ್ಷ್ಮತೆಯ
ನಿರ್ಬಂಧ ಧರ್ಮದಲಿ
ನೀತಿಯ ನೀಳ್ಗತೆ.
ಸಂಪ್ರದಾಯಾಚಾರ-ವೇದೋಪನಿ ಸಿದ್ಧಾಂತ- ಆಠಪಾಠೋಪಕೂಟಗಳ
ಪೌರ ಪಾಶ್ಚಾತ್ಯ ಕಾವ್ಯ ಸಾಹಿತ್ಯ ಸಾರದ ಬದುವಿನಲ್ಲೂ ಎಚ್ಚರಿಸಿದೆ
ನೀನೋ! ಅತ್ತಿತ್ತ ಸುತ್ತಮುತ್ತಲ ಅರಗಿಸಿಕೊಳ್ಳದ ಗತ್ತಿನಲಿ ಚಿತ್ತವನ್ನಿಟ್ಟಿದ್ದೆ.
ಆದರೆಂದೆಂದೂ ನಾ ಎಚ್ಚರವಾಗಿದ್ದೆ… ನಿನ್ನನೆಚ್ಚರಿಸುತ್ತದ್ದೆ.

ಇಂದು ನಿಸ್ಚಲನಾಗಿದ್ದೇನೆ
ಅಚ್ಚರಿಯ ಹುಚ್ಚುತನದ ಮತಿ ನಿನ್ನ ಕೈ ಬಿಟ್ಟಾಗಿದೆ
ತಪ್ಪೇ ನಿನ್ನಪ್ಪಿಕೊಂಡು ಪಪ್ಪಿ ಕೊಡುತ್ತಿದೆ.
ಈಗ ನೀ ತಪ್ಪಿನ ಮಬ್ಬಿನ ಕರಾಳ ಕೂಪದಲ್ಲಿದ್ದೀ..!
ಕುಲುಮೆಯಲ್ಲಿ ಅದ್ದಿ ಹದವಾಗಿ ತಿದ್ದಿ
ಮೊದ್ದಿನ ಬುದ್ದಿಯ ಗುದ್ದೆಬ್ಬಿಸುವೆ ನಾ…

:ಸರ್ವ ಜಗತ್ತ ಸೃಷ್ಟಿಯ ಕಾರ್ಯ ಕಾರಣಕರ್ತ….:
                             ------ನವೀನ ಮಂ

ಗುರುವಾರ, ಏಪ್ರಿಲ್ 5, 2012

ಪಿ.ಮಹ್ಮದ್ ಅಚರ ಕಚಗುಳಿಯ ಕೆಲ ಚಿತ್ರಗಳು

       ಅದೇನು ಮಜವಾದ ಚಿತ್ರಗಳು ಇವು. ಈ ಫೇಸಬುಕ್ಕಿನ ಪರದೆ ಮೇಲೆ ಯಾವದೋ ಫೋಟೋಕ್ಕೆ ಇನ್ನ್ಯಾವದೋ ರಾಜಕಾರಣವನ್ನೋ, ಕೆಟ್ಟಘಟನೆಯನ್ನೋ ಹೊಂದಿಸಿ ಬರೆಯುವ ಕಿಲಾಡಿಗಳ ಬರಹಕ್ಕಿಂತ ಈ ಚಿತ್ರಗಳು ಅದೆಂಥ ತಾಕತ್ತನ್ನ ಹೊಂದಿವೆ ಅಲ್ಲವಾ ಪಿ ಮಹ್ಮದ್ ಅವರ ಚಿತ್ರಗಳು ಅಂದ್ರೆ ಖುಷಿ ಎಷ್ಟೋ ಸಲ ಪೇಪರ್ ನೋಡಲು ಸಮಯ ಇಲ್ಲದಾಗ ಸಹಿತ ಪಿ ಮಹ್ಮದ್ ಅವರ ಕಚಗುಳಿ ನೋಡೋದೇ ಹೋಗೋದಿಲ್ಲ

ಕಾರ್ಟೂನ್


April 05, 2012
ಪಿ. ಮಹಮ್ಮದ್
April 03, 2012
ಪಿ. ಮಹಮ್ಮದ್























April 01, 2012
ಪಿ.ಮಹಮ್ಮದ್
March 29, 2012
ಪಿ. ಮಹಮ್ಮದ್
















ಮಂಗಳವಾರ, ಏಪ್ರಿಲ್ 3, 2012

ಸುರಕೋಡ ಮಾಸ್ತರರು



ನಮ್ಮೂರಿನಲ್ಲಿ ನನಗೆ ಸಿಕ್ಕ ಎರಡು ಆದರ್ಶಗಳು ಅಂದರೆ ಒಬ್ಬರು ವಿ.ಪಿ.ಕುಲಕರ್ಣಿ ಮತ್ತೊಬ್ಬರು ಹಸನ್ ನಯೀಂ ಸುರಕೋಡರು.  ಒಂದು ಸಣ್ಣ ಗೂಡಂಗಡಿಯ ಯಜಮಾನ ಕನ್ನಡ ಸಾಹಿತ್ಯಲೋಕದಲ್ಲಿ ಗುರುತಿಸಿಕೊಂಡಿರುವ ಹೆಸರಾಂತ ಅನುವಾದಕರು ಹೌದು ಎಂದು ಯಾರೋ ಹೇಳಿದರು. ವಿಚಿತ್ರವೆಂದರೆ ಆ ವ್ಯಕ್ತಿಯನ್ನು ಸೋಮುವಾರ ಹೊರತುಪಡಿಸಿ ವಾರದ ಆರು ದಿನವೂ ಗ್ರಂಥಾಲಯದಲ್ಲಿ ನೋಡುತ್ತಿದ್ದೆ ಆದರೆ ಅವರೆ ಸುರಕೋಡರು ಅನ್ನೋದು ಗೊತ್ತಾದದ್ದು ತುಂಬ ತಡವಾಗಿ. ಆ ಸರಳವಾದ ಮನಸ್ಸು ಅದೇನನ್ನೋ ಧೇನಿಸುತ್ತ, ಗ್ಯಾನದೊಳಗಿನ ಏಕಾಂತದ ಶೃತಿ ಹದ ಮಾಡುತ್ತಲೆ ಮಾಡಬೇಕಾದ ಅದೆಷ್ಟೋ ಅನುವಾದದ ಕೃತಿಗಳನ್ನು ಜಪಿಸುತ್ತಿರುತ್ತದೆ. ಅವರ ಸಜ್ಜನಿಕೆ-ಪರಿಚಿತರು ಎದುರಾದಾಗ ತಲೆಯೆತ್ತಿ ಕೊಂಚವೇ ತುಟಿ ಅಗಲಿಸಿ ನಗಾಡುವ ಅವರ ನಗು ಮತ್ತು ಮೆದು ಮಾತುಗಳು ಸೃಜನಶೀಲ ಮನಸ್ಸಿನ ಒಂದು ಭಾಗವಾಗಿ ಕಾಣತೊಡಗುತ್ತವೆ. ನಾನು ರಾಮದುರ್ಗಕ್ಕೆ ಹೋದಾಗೊಮ್ಮ ಅವರನ್ನು ಭೇಟಿಯಾಗಲೂ ಇಡಿಕಿರಿದಾದ ಆ ಸಂದುಗೊಂದುಗಳಲ್ಲಿಳಿದು ಮಡ್ಡಿ ಓಣಿಯ ಅವರ ಮನೆಗೆ ಹೋಗಿಬರುತ್ತೇನೆ. ಹೋದಾಗಲೆಲ್ಲ ಒಂದೀಟು ಬಿಡುವಿಲ್ಲದೆ ಹೈರಾಣದವರ ಹಾಗೆ ಕಾಣುವ ಅವರು ನನ್ನ ಕಂಡೊಡನೆ  ನನ್ನದೇ ವಯಸ್ಸಿಗಿಳಿದು ಮಾತಾಡಲು ಹವಣಿಸುತ್ತಾರೆ…. ಅವರ ಮುಂಗಾರು ಪತ್ರಿಕೆಯಿಂದ ಹಿಡಿದು ಇಂದಿಗೆ ಓದುತ್ತಿರುವ ಇಲ್ಲವೇ ಅನುವಾದಿಸುತ್ತಿರುವ ಕತೆಗಳ ಬಗ್ಗೆ ಗಂಟೆಗಟ್ಟಲೆ ಮನಸು ಬಿಚ್ಚಿ ಮಾತಾಡುತ್ತಾರೆ. ಬಿ.ಸಿ.ದೇಸಾಯಿ, ಮಹದೇವಪ್ಪ ಪಟ್ಟಣ, ನಿಲಗಂಗಯ್ಯ ಪೂಜಾರ, ಗೋಪಾಲಗೌಡ್ರು, ಲೋಹಿಯಾ, ಮಧುಲಿಮಯೆ, ಕರ್ಪೂರಿ ಠಾಕೂರ, ಹೆಬ್ಬಳ್ಳಿ ರೈತ ಹೋರಾಟ, ರಾಮದುರ್ಗ ದುರಂತ, ರಾಮದುರ್ಗ ಆಸ್ಥಾನ ದೇಸಾಯಿಯ ಪಿಸ್ತೂಲು ಹೀಗೆ ನಾನು ಸಿಕ್ಕಾಗಲೆಲ್ಲ ಒಂದೊಂದು ಕತೆ ಹೇಳಿ, ಕೆಲ ಪತ್ರಿಕೆಗಳಿಗೆ ಚಂದಾದಾರನನ್ನಾಗಿ ಮಾಡಿ ನನ್ನ ಅಕ್ಷರ ಲೋಕವನ್ನು,ಓದನ್ನು ವಿಸ್ತರಿಸಿದ ಗುರುಗಳು ಹಸನ್ ನಯೀಂ ಸುರಕೋಡರು.
ನಾನೊಮ್ಮೆ ನಮ್ಮ ಪುಟ್ಟ ನಾಟಕ ತಂಡವನ್ನು ಬೆನ್ನಿಗಂಟಿಸಿಕೊಂಡು ಯಾರ ನೆರವಿಲ್ಲದೆ ರಾಮದುರ್ಗದ ತಾಲ್ಲೂಕ ಆಫಿಸಿನ ಸಭಾಭವನದಲ್ಲಿ ನಾಟಕ ಪ್ರದರ್ಶನಕ್ಕಾಗಿ ಹೋಗಿದ್ದೆ. ನಾವು ಆಡುವ ನಾಟಕ “ಅಕ್ರಮ ಸಂತಾನ”. ನನ್ನೂರಿನಲ್ಲಿ ನಾನೇ ಅಪರಿಚಿತನಾಗಿ ಉಳಿದಿದ್ದ ಹೊತ್ತಲ್ಲಿ ಸುರಕೋಡ ಸಾರ್ ನೈತಿಕ ಬೆಂಬಲ ನೀಡಿದರು. (ಹಂಗ ನೋಡಿದರ ನನ್ನನ್ನ ನಾಟಕಕ್ಕ ಕಳಿಸಿದ್ದು ಅವರೆ) ಆ ಊರಿನಲ್ಲಿ ಒಂದಿಲ್ಲೊಂದು ಸಮಾಜವಾದಿ ಚಿಂತನೆಯ ಕಾರ್ಯಕ್ರಮಗಳನ್ನು ಆಗಾಗ ಹಮ್ಮಿಕೊಳ್ಳುತ್ತಲಿರುತ್ತಾರೆ. ಅಲ್ಲಿಯೇ ನಾನು ಸಿದ್ದನಗೌಡರನ್ನು, ತರೀಕೆರೆಯವರನ್ನು, ಭಟ್ಟರನ್ನು ಭೆಟ್ಟಿ ಮಾಡಿದ್ದು. ಸಮಾಜವಾದದ ಪುಟ್ಟ ಓಯಾಸಿಸ್ ಥರ ಕೆಲಸ ಮಾಡುವ ಅವರ ಬಳಗ ಈಗಲೂ ಅದೇ ಉತ್ಸಾಹದಲ್ಲಿ ಕೆಲಸ ಮಾಡುತ್ತಿರುತ್ತದೆ. ಬದುಕು ಹಣ್ಣಾದಂತೆ ಪಾತ್ರಕ್ಕೆ ಜೀವ ಬರುತ್ತದಂತೆ ಹಾಗೆ ಸುಸ್ತಾಗದ ಸುರಕೋಡ ಸರ್ ಕೆಲವೊಮ್ಮೆ ರಾತ್ರಿಯಿಡೀ ಓದಿ-ಬರೆದು ಹಗಲು ಮಲಗುತ್ತಾರೆ. ಅವರ ಭಾವದೊಳಗೆ ಅದೆಷ್ಟೋ ಬರಹಗಾರರು ಅನುವಾದಗೊಳ್ಳಬೇಕಿದೆ, ಅದೆಷ್ಟೋ ಚಿಂತನೆಗಳಿಗೆ ಕನ್ನಡತನ ತುಂಬಬೇಕಿದೆ…. ಅವರು ಕಂಡ ದರ್ಶನದಲ್ಲಿ  ಬದುಕಿ ಬಾಳಿದ ಕಥನವೂ ಅವರಿಂದ ಆತ್ಮಕತೆ ರೂಪದಲ್ಲಿ ಬರಬೇಕಿದೆ ಎಂದು ಬಯಸುತ್ತೇನೆ.
ಅವರ ಮೌನದ ಧಾಟಿಯೊಳಗೆ ಸಾಹಿರ್ ಲುಧಿಯಾನ್ವಿ, ಫೈಜ್ ಅಹ್ಮದ್ ಫೈಜ್, ರಾಗಾವಾಗಿ ಒಲಿಯುತ್ತಿರುತ್ತಾರೆ. ಪ್ರೀತನ ಭಾವಲೋಕದೊಳಗೆ ತಲ್ಲೀನಗೊಂಡವರಂತೆ ಕಾಣುತ್ತಾರೆ. ನನ್ನೊಳಗೆ ಸಮಾಜವಾದದ ಕನಸು ಬಿತ್ತಿದ ಅವರ ಬದುಕು ಮತ್ತು ಬರಹ ಒಂದಕ್ಕೊಂದು ಹೆಣೆದುಕೊಂಡಿದ್ದಾವೆ.  ಈ ದಿನ ಆಕಸ್ಮಾತ್ತಾಗಿ ಫೇಸಬುಕ್ಕಿನ ಮೂಲೆಯಲ್ಲಿ ಅವರ ಫೋಟೋ ಕಂಡಾಗ ಎಲ್ಲಿಲ್ಲದ ಖುಷಿಯಾಗಿ ಫೋನಾಯಿಸಿ ಮಾತಾಡಿದಾಗಲೂ ಅದೇ ಧಾಟಿಯ ಮಾತುಗಳು ಮತ್ತೆ ಬಂದವು. ‘ಚಿಂತನ’ಕ್ಕಾಗಿ ಫೈಜ ಅವರ ಕುರಿತಾದ ಪುಸ್ತಕ ಅನುವಾದಿಸುತ್ತಿದ್ದಾರೆ.

ಸೋಮವಾರ, ಏಪ್ರಿಲ್ 2, 2012

ನನ್ನೊಳಗಿಬ್ಬರು




EªÀ£ÀÄ ¤dªÁUÀ®Æ ¨sÁgÀwÃAiÀÄ£É UÀÄgÀÄ.
JAzÀ ªÀÄ£À¹ì£À ªÀiÁvÀÄ PÉüÀ¢zÀÝgÉ ºÉÃUÉ?
£À£ÉÆß¼ÀV§âgÀÄ, CªÀgÀ¯ÉÆè§â£ÀÄ EªÀ£ÉãÁ?
CªÀ£Éà ºÉüÀÄwzÁÝ£É PÉüÀ¨ÉÃPÀÄ. . . . .

“¨sÁgÀvÀ zsÀªÀÄð ¸À»µÀÄÚvÁ zÉñÀ”
F ªÀiÁvÉà ¸ÀļÉÀÄvÀÛzÉ £À£ÀUÉ,
EwÛÃaUÉ PÀtÄÚ ªÀÄÄaÑzÀgÉ ¸ÁPÀÄ ºÀ®ªÀÅ zsÀªÀÄðUÀ¼À
CxÀðªÁå¦Û C£ÀxÀð ªÁå¦ÛUÀ¼À ©wÛ.
PÀtÄÚ vÉgÉzÀgÉ ¥ÀÄqÁj ¸ÉãÉUÀ¼ÀÄ, C£Àå zsÀ«ÄÃðAiÀÄgÀ ªÉÄð£À zÁ½UÀ¼ÀÄ.
¨sÁgÀw ¸ÀÄvÀgÀ PÀtÂÚUÉ §mÉÖ PÀnÖgÀĪÀ dUÀzÀÄÎgÀÄUÀ¼ÀÄ.
§¸ÀªÀ£À vÀvÀé wgÀÄazÁÝgÉ PÉ®ªÀgÀÄ, C®èªÀÄ£À ¥Àæw¨sÉ ªÀÄgɪÀiÁazÁÝgÉ.
gÁå° ºÉÆgÀnzÉ, CzÀÄ vÀ¹æÃ£Á¼ÀAvÀºÀ C§¯É ¨ÉA§®PÉÌ J£À߯ÁUÀzÀÄ.

£À£ÉÆß¼ÀV£À E£ÉÆß§â¤UÉ ªÉÆ£Éß PÀ£À¸ÀÄ ©¢ÝvÀÄÛ
ºÉƸÀ ¯ÉÆÃPÀPÉÌ ºÁj ºÉÆÃVzÀÝ D ¸ÀĸÀªÀÄAiÀÄzÀ°,
D PÀët UÉÆÃZÀgÀªÁ¬ÄvÀÄ ¤dªÁzÀ zÀAiÉÄAiÀÄ zsÀªÀÄð gÁdå.
AiÀiÁªÀ RAqÀªÉÇÃ, AiÀiÁªÀ AiÀÄÄUÀªÉÇÃ, C°è ¥sÉÊUÀA§gÀ¤zÀÝ, Qæ¸ÀÛ¤zÀÝ.
¥sÉÊUÀA§gÀ §gÉAiÀÄÄwÛzÀÝ, Qæ¸ÀÛ PÀÄj PÁAiÀÄÄwÛzÀÝ, §¸ÀªÀ ¨ÉÆÃ¢ü¸ÀÄwÛzÀÝ,
§ÄzÀÞ ¨ÉÆÃ¢üªÀÈPÀëªÀ ºÀvÀÄÛªÀÅzÀ PÀ°AiÀÄÄwÛzÀÝ, «µÀÄÚ zÀ£À PÁAiÀÄÄwÛzÀÝ,
C°è C¸ÀªÀiÁ£ÀågÉ®ègÀÆ ¸ÁªÀiÁ£ÀågÁVzÁÝgÉ.

J®ègÀÆ “PÁAiÀÄPÀªÉà PÉʯÁ¸À” vÀvÀéPÉÌ ¸ÁxÀðPÀvÉ zÉÆgÀQ¸ÀĪÀ ªÀÄÄUÀÞgÀÄ.
C¯Éèà EgÀ¨ÉÃQvÀÄÛ EªÀgÀÄ E°èUÉÃvÀPÉ §gÀ¨ÉÃQvÀÄÛ EªÀgÀÄ!?
F £À£ÉÆß¼ÀV£À E§âgÀ£ÀÄß ¸ÀªÀiÁzsÁ¤¸ÀĪÀ ºÉÆwÛUÉ MAzÀÄ ¸ÀÄ¢Ý-
UÀtÂUÁjPÉUÉ vÉÆÃrzÀ vÀVΣÀ°è ¨ÁæºÀät£À ±ÀªÀªÀAvÉ!
PÉÆ¯ÉAiÉÄà ? CzÀÄ EªÀiÁªÀĸÁ§£À ºÉÆ®zÀ°è!
CªÀ£ÀÄ ¸ÀvÀÛ
DzÀgÉ EªÀ£ÀÄ ¸ÁAiÀÄÄvÁÛ£É ?
                                 - ನಾಗಸಂಜೀವ ಚಿಕ್ಕದಾಳವಟ್ಟ.

ಚಂದ್ರನೊಳಗಣ ಕಲೆ


 
ಅಂದು ಅವ್ವ ವಿವರಿಸಿದ ಚಂದ್ರನೊಳಗಣ ಕಲೆಗೆ 
ಇಂದು ಮೂರುಕಾಸಿನ ಕಿಮ್ಮತ್ತು ಇರಲಿಕ್ಕಿಲ್ಲ
ಒ………….ಳಾ…………. ಗೆ
 ಹುರಿಗೊಂಡ ಮೊಲದ ಆ ಎರಡು ಕಿವಿ
ಚಿಗರಿ ಮರಿಯ ಆ ಎರಡು ಕೊಂಬು
ಧಪ್ಪ ಮೀಸೆಯ ರಾಕ್ಷಸನ ಭರ್ಜಿ
ಹಸಿದುಕೊಂಡಿರುವ ಆ ತಾಯಿ ಮಕ್ಕಳು
ಹೀಗೆ
ಹಸಿದಾಗೊಂದು ಚಿತ್ರ
ಹೆದರಿದಾಗೊಂದು ಚಿತ್ರ
ರಚ್ಚೆ ಹಿಡಿದು ಅಳುವಾಗೊಂದು ಚಿತ್ರ
ಆಗಿನ ಸಂದರ್ಭಕ್ಕನುಸರಿಸಿ ಏನೇನೆಲ್ಲಾ ಆಗಿ
ಚಂದ್ರ, ಚಂದಪ್ಪ, ಚಂದಮಾಮ
ಅವ್ವನ ಕತೆಗೆ ಪಾತ್ರವಾಗಿ ಇಳಿದು ಬರುತ್ತಿದ್ದ

ಏಕಾಂತದ ಗೆಳೆಯನಾಗಿ
ಯಾವಾಗಲೂ ನಾ ಹೋದತ್ತ ಬರುತ್ತಿದ್ದ
ಒಮ್ಮೊಮ್ಮೆ ಅರಕಳಿಯಾಗಿ ದುಂಡಾಗಿ ಚಪ್ಪಟೆಯಾಗಿ
ಅವನು ಸುತ್ತುವ ಲೋಕದ ಕತೆಗಳನ್ನ
ನನಗಾಗಿ ಹೊತ್ತು ತಂದಿರುತ್ತಿದ್ದ.

ಈಗೀಗ ಭಾರವಾದಂತೆ 
ನನ್ನ ಬಿಡುವಿಲ್ಲದ ಹೊತ್ತಿಗೆ ಸಿಕ್ಕದಾಗಿರುವ
ಆ ಅವನ ಕಷ್ಟಗಳದೆಷ್ಟಿದ್ದಾವೋ…
ಅವ್ವ ಈಗ ಆ ಕತೆಗಳಿಗೆ ಜೀವ ಕೊಡಲು
ಮಕ್ಕಳನ್ನು ಕರೆಯುತ್ತಾಳೆ
ಅವರ ಇಷ್ಟಕ್ಕೆ ದಕ್ಕದ ಅವಳ ಮಾತು ಸೊರಗಿದಂತೆ
ಸುಮ್ಮನಿದ್ದುಬಿಡುತ್ತವೆ.

 ಮೌನದ ನೋಟ
ಕ್ಯಾಮರಾದಂತೆ ಕ್ಲಿಕ್ಕಿಸಿಕೊಂಡಿದ್ದ.
ನನ್ನ ಹರವಿನ ಹಂಬಲ ಹಿಗ್ಗಿಸಿದ,
ದೂರದೆಲ್ಲೋ ಓಡಾಡಿಕೊಂಡು ಯೋಗಕ್ಷೇಮ ಕೇಳುವ ಮಿತ್ರನಂತೆ
ಮಾಯಾ ಕನ್ನಡಿಯ ಬೆಲೆಗೆ ದಕ್ಕಲಾರದ ವೃತ್ತದೊಳಗಿನ ಕಲೆಯಾಗಿ
 ಆ ಚಂದ್ರನೊಳಗಣ ಕಲೆ ಹಾಗೇ ಉಳಿದುಕೊಂಡಿದೆ.

       
            ಮಹಾದೇವ ಹಡಪದ

ಧಾರವಾಡ ಎಂಬ ಸ್ವಾವಲಂಬನೆಯ ಸಾಂಸ್ಕೃತಿಕ ನಗರ

ಉತ್ತರಕರ್ನಾಟಕದ ಸಾಂಸ್ಕೃತಿಕ ಐಕಾನ್ ಧಾರವಾಡ. ದೇಶದ ಹೆಸರಾಂತ ಸಂಗೀತ ವಿದೂಷಿಗಳು, ಪಂಡಿತರು ಧಾರವಾಡ ನೆಲದಲ್ಲಿ ಸಂಗೀತ ಕಛೇರಿ ಕೊಡಲಿಕ್ಕೆ ಕಾಯುತ್ತಾರೆ ಹೇಗೋ ಹಾಗೆಯೇ ನ...