ಶನಿವಾರ, ಏಪ್ರಿಲ್ 20, 2013











ಆಟಮಾಟ ಸಾಮಾಜಿಕವಾದ ಸಾಂಸ್ಕೃತಿಕ ಕಾಳಜಿಗಳನ್ನಿಟ್ಟುಕೊಂಡೇ ನಾಟಕ ಮಾಡುತ್ತ ಬಂದಿದೆ. ಈಗ ಕರ್ನಾಟಕದಲ್ಲಿ ರಂಗಾಯಣ ಬಿಟ್ಟರೆ ಪೂರ್ಣಾವಧಿ ರೆಪರ್ಟರಿಗಳು ಯಕ್ಷಗಾನ ಹೊರತುಪಡಿಸಿ ಇಲ್ಲವಾಗಿವೆ. ಹಾಗೊಂದು ಸ್ವತಂತ್ರ ವೃತ್ತಿ ರೆಪರ್ಟರಿಯನ್ನು ಕಟ್ಟುವ ಆಶಯ ನಮ್ಮದಾಗಿದ್ದರೂ ಸಾಧ್ಯವಾಗುತ್ತಿಲ್ಲ. ಆದರೆ “ಆಟಮಾಟ ಅಡ್ಯಾಟ”ಕ್ಕಾಗಿ ನಾವು ಏಳೆಂಟು ಜನ ರಂಗಭ್ಯಾಸಿಗಳು ವರ್ಷದಲ್ಲಿ ಮೂರು ತಿಂಗಳು ಬಿಡುವು ಮಾಡಿಕೊಂಡು, ಉಮೇದಿನಿಂದ ನಾವುನಾವೇ ಒಂದು ನಾಟಕ ನಿರ್ದೇಶಿಸಿಕೊಂಡು ನಾಟಕ ಮಾಡುತ್ತ ಬಂದಿದ್ದೇವೆ. ಒಮ್ಮೊಮ್ಮೆ ವರ್ಷದಲ್ಲಿ ಎರಡು ಸುತ್ತು ಎರಡೆರಡು ನಾಟಕಗಳನ್ನು ತಯಾರಿಸಿ ಕರ್ನಾಟಕದಾದ್ಯಂತ ಪ್ರದರ್ಶಿಸಿದ್ದೇವೆ. ಇಲ್ಲಿಗೆ ಆಟಮಾಟ ಐದು ವರ್ಷ ಪೂರೈಸಿದ್ದು ಒಂಬತ್ತು ನಾಟಕಗಳ ಅಡ್ಯಾಟ ಮಾಡಿರುವುದು ನಮ್ಮ ಹೆಮ್ಮೆಯಾಗಿದೆ. ಈ ಕೆಳಗಿ ಚಿತ್ರಗಳು ರಮಾಯಿ ನಾಟಕದ ದೃಶ್ಯಗಳು. ನಮ್ಮ ತಂಡದ ಪ್ರೀತಿಯ ಛಾಯಾಚಿತ್ರಗ್ರಾಹಿ ರಾಮಚಂದ್ರ ಕುಲಕರ್ಣಿ ಸೆರೆ ಹಿಡಿದ ನಾಟಕದ ಕ್ಷಣಗಳು ಇಲ್ಲಿವೆ. ನಾಟಕ-ರಮಾಯಿ. ನಿರ್ದೇಶನ- ಮಹಾದೇವ ಹಡಪದ ಸಾಲಾಪೂರ

ಕಾಮೆಂಟ್‌ಗಳಿಲ್ಲ:

ಧಾರವಾಡ ಎಂಬ ಸ್ವಾವಲಂಬನೆಯ ಸಾಂಸ್ಕೃತಿಕ ನಗರ

ಉತ್ತರಕರ್ನಾಟಕದ ಸಾಂಸ್ಕೃತಿಕ ಐಕಾನ್ ಧಾರವಾಡ. ದೇಶದ ಹೆಸರಾಂತ ಸಂಗೀತ ವಿದೂಷಿಗಳು, ಪಂಡಿತರು ಧಾರವಾಡ ನೆಲದಲ್ಲಿ ಸಂಗೀತ ಕಛೇರಿ ಕೊಡಲಿಕ್ಕೆ ಕಾಯುತ್ತಾರೆ ಹೇಗೋ ಹಾಗೆಯೇ ನ...